ಜ್ಞಾನಭಂಡಾರದ ಶಕ್ತಿ, ಸರಸ್ವತಿಯೇ ನಾಚುವಂತಹ ಬುದ್ಧಿಶಕ್ತಿ, ವಿಶ್ವಕ್ಕೆ ಮಾದರಿಯಾದ ಸಂವಿಧಾನವನು ನಿರ್ಮಿಸಿದ ಯುಕ್ತಿ ಇರುವ ಧೀಮಂತ ವ್ಯಕ್ತಿಯ ಜನನ ೧೮೯೧ ಏಪ್ರಿಲ್ ೧೪ ರಂದು ಭೀಮಬಾಯಿ ಹಾಗೂ ರಾಮಜಿ ಅವರ 14ನೇ ಹಾಗೂ ಕೊನೆಯ ಮಗನಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡಿಯ ಮಹಾರ್ ಜಾತಿಯಲ್ಲಿ ಭೀಮರಾವ್ ರಾಮಜೀ ಅಂಬೇಡ್ಕರ್ಎಂಬ ನಾಮಧಾರಿ ಯಾಗಿ ಜನನ ಪಡೆದರು. ಬಡತನದ ಕಗ್ಗತ್ತಲು ಒಂದೆಡೆಯಾದರೆ ಅಸ್ಪೃಶ್ಯತೆಯ ಅಲೆಗಳ ಭೋರ್ಗರೆತ ಇನ್ನೊಂದೆಡೆ. ಇದರ ಮಧ್ಯದಲ್ಲಿ 1896 ರಲ್ಲಿ ತನ್ನ ಹಡೆದೌವನ ಕಳೆದುಕೊಂಡರು. ಅತ್ತೆಯ ಆರೈಕೆಯಲ್ಲಿ ಬೆಳೆದ ಅಂಬೇಡ್ಕರ್ ಓದಲು ಬಲು ಆಸಕ್ತರು. 1890 ರಲ್ಲಿ ಸತಾರಾದ ಸರ್ಕಾರಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಅಸ್ಪೃಶ್ಯತೆಯ ಕರಾಳ ಅನುಭವಗಳ ನಡುವೆ ನಿರ್ವಹಿಸಲು ಧೈರ್ಯ ದಿಂದ ಮುಂದಾದರು. ಬಾಲಕನಾಗಿದ್ದಾಗ ಇವರು ಊರ ಕೆರೆಯಲ್ಲಿ ನೀರು ಕುಡಿದಕ್ಕೆ ಊರಿನವರಿಂದ ಪೆಟ್ಟು ತಿಂದರೂ. ಒಂದು ಬಾರಿ ಗಾಡಿಯಲ್ಲಿ ಹೋಗುವಾಗ ಇವರು ದಲಿತ ನೆಂದು ತಿಳಿದದಕ್ಕೆ ಜನ ಇವರನ್ನ ಗಾಡಿಯಿಂದ ಹೊರದೂಡಿದರು. ಆದರೆ ಈ ಅನುಭವಗಳನ್ನು ಛಲವಾಗಿ ಸ್ವೀಕರಿಸದೆ ಇದಿದ್ದರೆ ವಿಶ್ವವೇ ಮೆಚ್ಚುವಂತ ಮಹಾನ್ ಗ್ರಂಥವನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ೧೯೦೬ ಏಪ್ರಿಲ್ ನಾಲ್ಕರಂದು ರಮಾಬಾಯಿ ಎಂಬವರೊಡನೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಅಂಬೇಡ್ಕರ್ಗೆ ಆಗ ೧೫ ವರ್ಷ .೧೯೦೭ ರಲ್ಲಿ ಮೆಟ್ರಿಕ್ಯುಲೇ...
Truth Revealed Here