ಜ್ಞಾನಭಂಡಾರದ ಶಕ್ತಿ, ಸರಸ್ವತಿಯೇ ನಾಚುವಂತಹ ಬುದ್ಧಿಶಕ್ತಿ, ವಿಶ್ವಕ್ಕೆ ಮಾದರಿಯಾದ ಸಂವಿಧಾನವನು ನಿರ್ಮಿಸಿದ
ಯುಕ್ತಿ ಇರುವ ಧೀಮಂತ ವ್ಯಕ್ತಿಯ ಜನನ ೧೮೯೧ ಏಪ್ರಿಲ್ ೧೪ ರಂದು ಭೀಮಬಾಯಿ ಹಾಗೂ ರಾಮಜಿ ಅವರ 14ನೇ ಹಾಗೂ
ಕೊನೆಯ ಮಗನಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡಿಯ ಮಹಾರ್ ಜಾತಿಯಲ್ಲಿ ಭೀಮರಾವ್ ರಾಮಜೀ ಅಂಬೇಡ್ಕರ್ಎಂಬ ನಾಮಧಾರಿ ಯಾಗಿ ಜನನ ಪಡೆದರು.
ಬಡತನದ ಕಗ್ಗತ್ತಲು ಒಂದೆಡೆಯಾದರೆ ಅಸ್ಪೃಶ್ಯತೆಯ ಅಲೆಗಳ ಭೋರ್ಗರೆತ ಇನ್ನೊಂದೆಡೆ.
ಇದರ ಮಧ್ಯದಲ್ಲಿ 1896 ರಲ್ಲಿ ತನ್ನ ಹಡೆದೌವನ ಕಳೆದುಕೊಂಡರು. ಅತ್ತೆಯ ಆರೈಕೆಯಲ್ಲಿ ಬೆಳೆದ ಅಂಬೇಡ್ಕರ್ ಓದಲು ಬಲು ಆಸಕ್ತರು. 1890 ರಲ್ಲಿ ಸತಾರಾದ
ಸರ್ಕಾರಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಅಸ್ಪೃಶ್ಯತೆಯ ಕರಾಳ ಅನುಭವಗಳ ನಡುವೆ ನಿರ್ವಹಿಸಲು ಧೈರ್ಯ ದಿಂದ
ಮುಂದಾದರು. ಬಾಲಕನಾಗಿದ್ದಾಗ ಇವರು ಊರ ಕೆರೆಯಲ್ಲಿ ನೀರು ಕುಡಿದಕ್ಕೆ ಊರಿನವರಿಂದ ಪೆಟ್ಟು ತಿಂದರೂ. ಒಂದು ಬಾರಿ
ಗಾಡಿಯಲ್ಲಿ ಹೋಗುವಾಗ ಇವರು ದಲಿತ ನೆಂದು ತಿಳಿದದಕ್ಕೆ ಜನ ಇವರನ್ನ ಗಾಡಿಯಿಂದ ಹೊರದೂಡಿದರು. ಆದರೆ ಈ
ಅನುಭವಗಳನ್ನು ಛಲವಾಗಿ ಸ್ವೀಕರಿಸದೆ ಇದಿದ್ದರೆ ವಿಶ್ವವೇ ಮೆಚ್ಚುವಂತ ಮಹಾನ್ ಗ್ರಂಥವನ್ನು ಕೊಡಲು
ಸಾಧ್ಯವಾಗುತ್ತಿರಲಿಲ್ಲ.
೧೯೦೬ ಏಪ್ರಿಲ್ ನಾಲ್ಕರಂದು ರಮಾಬಾಯಿ ಎಂಬವರೊಡನೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಅಂಬೇಡ್ಕರ್ಗೆ ಆಗ ೧೫ ವರ್ಷ .೧೯೦೭ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ಉತ್ತೀರ್ಣರಾಗಿ ಎಲ್ಲರ ಗಮನ ಸೆಳೆದರು. ೧೯೦೮ ಎಲ್ಫಿ೦ಸ್ನ್ನ್ಪ ಕಾಲೇಜಿಗೆ ಪ್ರವೇಶ ಪಡೆದರು. ನಂತರ 1912ರಲ್ಲಿ ರಮಾಬಾಯಿ ಹಾಗೂ ಅಂಬೇಡ್ಕರ್ ಅವರಿಗೆ ಯಶವಂತ ನೆಂಬ ಪುತ್ರ ಜನಿಸಿದನು. ನಂತರ ೧೯೧೩ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಬಿ ಎ ಪದವಿ ಪಡೆದ ನಂತರ ೧೯೧೨ ಫೆಬ್ರವರಿ ಎಲ್ಲಿ ತಮ್ಮ ಪ್ರೀತಿಯ ತಂದೆಯಾದ ರಾಮಜಿ ಮಲೋಜಿ ಸಕ್ಪಲ್ ಅವರನ್ನು ಕಳೆದುಕೊಂಡರು ಅದೇ ಏಪ್ರಿಲ್ ನಲ್ಲಿ ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಬರೋಡಾದ ರಾಜ ಅಯ್ಯೋ ಸಯ್ಯಾಜಿ ಗಾಯಕ್ವಾಡ್ ರಿಂದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿಸಿಕೊಂಡುಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ಅರ್ಥಶಾಸ್ತ್ರ ಮುಖ್ಯ ವಿಷಯವಾಗಿ ಎಂ ಎ ಪದವಿಯನ್ನು ಪಡೆದರು ಇದರೊಟ್ಟಿಗೆ ಸಮಾಜಶಾಸ್ತ್ರ ಇತಿಹಾಸ ತತ್ವಶಾಸ್ತ್ರ ರಾಜ್ಯಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿದ್ದ ಬಾಬಾ ಸಾಹೇಬ್ 1916 ಮೇ10 ರಂದು ವಿಶ್ವವಿದ್ಯಾಲಯದ ವಿಚಾರ ಸಂಕಿರಣದಲ್ಲಿ ಭಾರತದ ಜಾತಿ ವ್ಯವಸ್ಥೆ ಕುರಿತು ಪ್ರಬಂಧ ಮಂಡನೆ ಮಾಡಿ ನಂತರ ಪಿ ಎಚ್ ಡಿ ಪ್ರಬಂಧವನ್ನು ಮಂಡಿಸಿ ಲಂಡನ್ ಗೆ ತೆರಳಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಪೊಲಿಟಿಕಲ್ ಸೈನ್ಸ್ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು.
ನಂತರ ಬರೋಡ ರಾಜರ ವಿದ್ಯಾರ್ಥಿವೇತನ ಮುಗಿಸಿದನ್ನ ಗಮನಿಸಿ ಅವರು ಭಾರತಕ್ಕೆ 1917 ರಲ್ಲಿ ಹಿಂತಿರುಗಿದರು ಅದೇ ಜುಲೈ ತಿಂಗಳಲ್ಲೇ ಬರೋಡ ರಾಜರ ರಕ್ಷಣಾ ಕಾರ್ಯದರ್ಶಿಯಾಗಿ ನೇಮಕಗೊಂಡು ಹಾಗೂ ಅವರ ಹಣಕಾಸು ಇಲಾಖೆಯಲ್ಲಿ ಅಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಆದರೆ ಬೆನ್ನುಬಿಡದ ಅಸ್ಪೃಶ್ಯತೆಯು ಅವರ ಕಾಯಕಕ್ಕೆ ಅಡ್ಡಿಯಾಯಿತು ಅವರ ಕೆಲಸವನ್ನು ಕಿತ್ತೂ ರಾಜಾಶ್ರಯದಿಂದ ಹೊರಕ್ಕೆ ಬರುವಂತೆ ಮಾಡಿತು ನಂತರ 1918
ರಲ್ಲಿ ಬಾಂಬೆಯ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು ನಂತರ 1918 ರಲ್ಲಿ
ನಾಗಪುರದಲ್ಲಿ ನಡೆದ ತಳ ಸಮುದಾಯಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು ಹಾಗೂ 31 ಜನವರಿ 1920ರಲ್ಲಿ ತಳ
ಸಮುದಾಯಗಳಿಗೆ ದನಿಯಾಗಲು "ಮೂಕ ನಾಯಕ"ಎಂಬ ಮರಾಠಿ ವಾರಪತ್ರಿಕೆಯನ್ನು ಆರಂಭಿಸುತ್ತಾರೇ 1920 ಮಾರ್ಚ್ 21ರಂದು ಛತ್ರಪತಿ ಸಾಹು ಮಹಾರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಳಸಮುದಾಯಗಳ ಸಮಾವೇಶದಲ್ಲಿ ಭಾಗಿಯಾಗಿರುತ್ತಾರೆ. ನಾಗಪುರದಲ್ಲಿ 1920ರಲ್ಲಿ ನಡೆದ ಸಮಾವೇಶದಲ್ಲಿ ಅಸ್ಪೃಶ್ಯತೆಯ ಕುರಿತು ಐತಿಹಾಸಿಕ ಭಾಷಣವನ್ನು ಮಾಡುತ್ತಾರೆ. 1932ರಲ್ಲಿ ತಳಸಮುದಾಯದವರಿಗೆ ಪ್ರತ್ಯೇಕ ವ್ಯವಸ್ಥೆ ಆಗ್ರಹ ಮಾಡುತ್ತಾರೆ. ತಮ್ಮ ವಕೀಲ ವೃತ್ತಿಯನ್ನು ನಿರ್ವಹಿಸುತ್ತಿರುವಾಗ ಇವರಿಗೆ ತಮ್ಮ ಹೆಂಡತಿಯಾದ ರಮಬಾಯಿ ತೀರಿ ಹೋದ ವಿಷಯ ತಿಳಿದರು ಅವರು ವಾದವನ್ನು ಮಂಡಿಸುವ ತನಕ ಯಾವುದೇ ಹೂವ ಪೋವಾಗಳಿಗೆ ಮಣಿಯದೆ 45 ಜನ ಸ್ವಾತಂತ್ರ ಹೋರಾಟಗಾರರ ಪ್ರಾಣಪಕ್ಷಿ ಹಾರಿ ಹೋಗುವುದನ್ನು ತಪ್ಪಿಸುತ್ತಾರೆ. 1927 ಮಾರ್ಚ್ 20ರಂದು ಐತಿಹಾಸಿಕ ಮಹಧ್ ಚೌಗರ್ ಕೆರೆಯಲ್ಲಿ ಅಸ್ಪೃಶ್ಯರ ಗುಂಪನ್ನು ಕರೆದೊಯ್ದು ನೀರು ಕುಡಿಯುವ ಮೂಲಕ ಅಸ್ಪೃಶ್ಯತೆಯನ್ನು ತೊಲಗಿಸುವ ಎಂಬ ಘೋಷಣೆಗಳನ್ನುತೊಲಗಿಸುವ ಎಂಬ ಘೋಷಣೆಗಳನ್ನು ಮೊಳಗಿಸುತ್ತಾರೆ.
1927ಏಪ್ರಿಲ್ 3 "ಬಹಿಷ್ಕೃತ ಭಾರತ" ಎಂಬ ಪತ್ರಿಕೆಯನ್ನು ಶುರುಮಾಡುತ್ತಾರೆ 1936 ರಲ್ಲಿ "ಸ್ವಾತಂತ್ರ್ಯ ಕಾರ್ಮಿಕ ಪಕ್ಷವನ್ನ" ಸ್ಥಾಪಿಸುತ್ತಾರೆ 1932 ರ ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಿ 17 ಸ್ಥಾನಗಳನ್ನು ಗೆಲ್ಲುತ್ತಾರೆ.
1947ರಲ್ಲಿ ನೆಹರು ಸಂಪುಟವನ್ನು ಸೇರಿ ಮೊದಲ ಸ್ವಾತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಆಯ್ಕೆ ಆಗುತ್ತಾರೆ ನಂತರ
ಸಂವಿಧಾನ ಕರಡು ರಚನಾ ಸಮಿತಿಗೆ ಆಯ್ಕೆಯಾಗಿ ಅಧ್ಯಕ್ಷರು ಆಗುತ್ತಾರೆ. 1949ರಲ್ಲಿ ಸಂವಿಧಾನ ಕರಡು ರಚನೆ
ಪೂರ್ಣಗೊಳ್ಳುತ್ತದೆ. 15 ಏಪ್ರಿಲ್ 1947 ರಲ್ಲಿ ಡಾಕ್ಟರ್ ಶಾರದಾ ಕಬೀರ್ ಅವರೊಂದಿಗೆ ವಿವಾಹವಾಗುತ್ತಾರೆ. 1951 ರ ಸೆಪ್ಟೆಂಬರ್
9ರಂದು ಹಿಂದೂ ವಾರ ಮಂಡನೆಯ ವಿಷಯದಲ್ಲಿ ಬೇಸರಗೊಂಡು ನೆಹರು ಸಂಪುಟದಿಂದ ಹೊರ ನಡೆಯುತರರೇ. ನಂತರ
1956ರಲ್ಲಿ ಮೇಲು ಕೀಳು ಎಂಬ ಭೇದ ಭಾವ ಇಲ್ಲದ ಭೌದ್ಧ ಧರ್ಮಕ್ಕೆ ಮತಂತರ ಆದರೂ. ಹಿಂದೂ ಧರ್ಮಕ್ಕೆ ಅದರ ಅಸಮಾನತೆಗೆ ಏಳ್ಳು ನೀರು ಬಿಟ್ಟರು. ಅದೇ ವರ್ಷದ ಡಿಸೆಂಬರ್ ಅಲ್ಲಿ 1956 ರಲ್ಲಿ ತಮ್ಮ ಕೊನೆ ಉಸಿರನ್ನು ಎಳೆದು ಇಹಲೋಕಕ್ಕೆ ಪಯಣ ಬೆಳೆಸಿದರು. ಇವರ ಸಾಧನೆಗೆ 1990ರಲ್ಲಿ ಭಾರತ ರತ್ನ ನೀಡಿ ಈ ಅಮೂಲ್ಯ ರತ್ನವನ್ನು ಗೌರವಿಸಿದರು. ಇವರು ಅನೇಕ ಪುಸ್ತಕಗಳನ್ನು ನಮ್ಮ ಯುವ ಸಮಾಜಕ್ಕೆ ನೀಡಿದ್ದಾರೆ.
ಇವರಿಂದಲೇ ಇಂದು ಟೀ ಮಾರುವವರು ಪ್ರಧಾನಿಯಾಗಲು ಸಾಧ್ಯ ಆಗಿರುವುದು.
ರೋಹಿತ್. ಡಿ. ಎಸ್
Comments
Post a Comment